ಹಲಸಂಗಿJj lehe 7 P8 50 Cck34r03wsYDh s Th ;U 0P Wo

ಹಲಸಂಗಿ
India-locator-map-blank.svg
Red pog.svg
ಹಲಸಂಗಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ವಿಜಯಪುರ
ನಿರ್ದೇಶಾಂಕಗಳು 16.1833° N 75.7000° E
ವಿಸ್ತಾರ
 - ಎತ್ತರ
೧೨೦೦ km²
 - 770 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೨)
 - ಸಾಂದ್ರತೆ
೧೫೦೦೦
 - ೫೦/ಚದರ ಕಿ.ಮಿ.

ಹಲಸಂಗಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ.

ಪರಿವಿಡಿ

  • ಇತಿಹಾಸ
  • ಭೌಗೋಳಿಕ
  • ಹವಾಮಾನ
  • ಜನಸಂಖ್ಯೆ
  • ಸಾಂಸ್ಕೃತಿಕ
  • ಕಲೆ ಮತ್ತು ಸಂಸ್ಕೃತಿ
  • ಧರ್ಮ
  • ಭಾಷೆ
  • ಮಸೀದಿ
  • ೧೦ ನೀರಾವರಿ
  • ೧೧ ಕೃಷಿ ಮತ್ತು ತೋಟಗಾರಿಕೆ
  • ೧೨ ಆರ್ಥಿಕತೆ
  • ೧೩ ಉದ್ಯೋಗ
  • ೧೪ ಬೆಳೆ
  • ೧೫ ಸಸ್ಯ
  • ೧೬ ಹಬ್ಬ
  • ೧೭ ಶಿಕ್ಷಣ
  • ೧೮ ಸಾಕ್ಷರತೆ
  • ೧೯ ರಾಜಕೀಯ
  • ೨೦ ಮಾರ್ಗ

ಇತಿಹಾಸ[ಬದಲಾಯಿಸಿ]

ಇಂಡಿಯಿಂದ ಪಶ್ಚಿಮಕ್ಕೆ ೨೦ ಕಿ.ಮೀ. ದೂರವಿರುವ ಹಲಸಂಗಿಯನ್ನು ‘ಕನ್ನಡ ನುಡಿ’ ನವೋದಯಕ್ಕೆ ಕಾರಣವಾದ ಕೆಲವೇ ಕೇಂದ್ರಗಳಲ್ಲಿ ಒಂದೆಂದು ಭಾವಿಸಲಾಗುತ್ತಿದೆ. ಇಲ್ಲಿ ದಿನಾಂಕ ೩೧-೦೭-೧೯೦೩ ರಂದು ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವನವರ ಉದರದಲ್ಲಿ ಜನಿಸಿದ ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿಯವರು; ಗೆಳೆಯ ಮಾದಣ್ಣನ ಮಧುರತೆಯೊಂದಿಗೆ ಬೆರೆತು ತಮ್ಮನ್ನು ಮಧುರಚೆನ್ನರೆಂದು ಕರೆದುಕೊಂಡರು.

೧೯೨೨ ರಲ್ಲಿಯೇ ಹಲಸಂಗಿ ಗೆಳೆಯರ ಗುಂಪನ್ನು (ಪಿ. ದುಲಾಸಾಹೇಬ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣ ಹಾಗೂ ಓಲೆಕಾರ ಮಾದಣ್ಣ) ಕಟ್ಟಿಕೊಂಡು ಧಾರವಾಡದ ಗೆಳೆಯರ ಗುಂಪಿನೊಂದಿಗೆ ಸಂಪರ್ಕ ಪಡೆದು ಅವರೊಂದಿಗೆ ಅನನ್ಯವಾಗಿ ಬೆರೆತುಕೊಂಡರು. ಶಾರದಾ ವಾಚನಾಲಯ ಸ್ಥಾಪಿಸಿ ತಾವೂ ಸಾಹಿತ್ಯ ರಚಿಸುವುದಲದೇ ಗೆಳೆಯರನ್ನು ಬೆಳೆಯಿಸಿದರು. ‘ನನ್ನ ನಲ್ಲ’ದ ಮೂಲಕ ಅನುಭಾವ ಕವಿಯಾದ ಅವರು ‘ಪೂರ್ವರಂಗ’, ‘ಕಾಳರಾತ್ರಿ’, ‘ಬೆಳಗು’ ಎಂಬ ಗದ್ಯ ಕೃತಿಗಳ ಮೂಲಕ ಆ ಕಾಲಕ್ಕೆ ವಿಶಿಷ್ಟ ತಂತ್ರವನ್ನು ಬಳಸಿದ್ದರು. ಮುಲ್ಕಿ ಪರೀಕ್ಷೆಯವರೆಗೆ ಓದಿದ ಮಧುರ ಚೆನ್ನರು ಸುಮಾರು ೨೨ ಭಾಷೆಗಳನ್ನು ಬಲ್ಲವರಾಗಿದ್ದರೆಂಬುದು ಸೋಜಿಗ. ಜಾನಪದ ಸಾಹಿತ್ಯ, ಶಾಸನ ಸಾಹಿತ್ಯ ಇತ್ಯಾದಿಗಳಿಗೂ ಪ್ರಾಮುಖ್ಯತೆ ನೀಡಿದ್ದರು.

ಶ್ರೀಅರವಿಂದರ ಕಡೆಗೆ ವಾಲಿದ ಮಧುರ ಚೆನ್ನರ ಹಲಸಂಗಿ ಗೆಳೆಯರ ಗುಂಪು ೧೯೪೩ ರಲ್ಲಿ ಅರವಿಂದ ಮಂಡಲವಾಗಿ ರೂಪುಗೊಂಡಿತು. ಈ ಮೊದಲ ೧೫ ನೆಯ ಅಗಷ್ಟ ೧೯೩೮ ರಲ್ಲಿ ಶ್ರೀಅರವಿಂದರ ಪ್ರಥಮ ದರ್ಶನ ಪಡೆದ ಮಧುರ ಚೆನ್ನರು ೧೫ನೆಯ ಅಗಷ್ಟ ೧೯೫೩ ರಂದು ತಾವು ಹುಟ್ಟಿದ ಶ್ರಾವಣದ ಸಿರಿಯಾಳ ಷಷ್ಠಿಯ ದಿನದಂದೇ ಲಿಂಗೈಕ್ಯರಾದರು. ಮುಂದೆ ೧೫ ನೆಯ ಜುಲೈ ೧೯೭೨ ರಲ್ಲಿ ಹಲಸಂಗಿಯಲ್ಲಿ ಶ್ರೀಅರವಿಂದರ ಸ್ಮಾರಕ ಭವನದ ಸ್ಥಾಪನೆಯೂ ಆಗಿದೆ.

ಹಲಸಂಗಿಯಲ್ಲಿ ಇಂದು ಮಧುರಚೆನ್ನರ ಸ್ವಂತ ತೋಟದಲ್ಲಿ ಅವರ ಸಮಾಧಿ ಮತ್ತು ಮಹರ್ಷಿ ಶ್ರೀಅರವಿಂದರ ಸ್ಮಾರಕ ಭವನ ಕಾಣಬಹುದಾಗಿದೆ. ಸಾಹಿತ್ಯ, ಆಧ್ಯಾತ್ಮ ಹಾಗೂ ಸಂಸ್ಕೃತಿಗಳ ತ್ರಿವೇಣಿ ಸಂಗಮವನ್ನಿಲ್ಲಿ ಕಾಣಬಹುದಾಗಿದೆ.

ಸೂಚನೆ : ಮಧುರ ಚೆನ್ನರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಲಸಂಗಿಯಲ್ಲಿ ವಾಸವಾಗಿರುವ ಅವರ ಮಗನಾದ ಪುರುಷೋತ್ತಮ ಗಲಗಲಿಯವರೊಂದಿಗೆ ಸಂವಾದ ಮಾಡಬಹುದು.

ಭೌಗೋಳಿಕ[ಬದಲಾಯಿಸಿ]

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ[ಬದಲಾಯಿಸಿ]

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ[ಬದಲಾಯಿಸಿ]

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ[ಬದಲಾಯಿಸಿ]

ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ[ಬದಲಾಯಿಸಿ]

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ[ಬದಲಾಯಿಸಿ]

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ಮಸೀದಿ[ಬದಲಾಯಿಸಿ]

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ.

ನೀರಾವರಿ[ಬದಲಾಯಿಸಿ]

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿ ಮತ್ತು ತೋಟಗಾರಿಕೆ[ಬದಲಾಯಿಸಿ]

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ[ಬದಲಾಯಿಸಿ]

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ[ಬದಲಾಯಿಸಿ]

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ[ಬದಲಾಯಿಸಿ]

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ[ಬದಲಾಯಿಸಿ]

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಹಬ್ಬ[ಬದಲಾಯಿಸಿ]

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ[ಬದಲಾಯಿಸಿ]

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.

ಸಾಕ್ಷರತೆ[ಬದಲಾಯಿಸಿ]

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ[ಬದಲಾಯಿಸಿ]

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಮಾರ್ಗ[ಬದಲಾಯಿಸಿ]

  • ವಿಜಯಪುರ ಜಿಲ್ಲೆ ೬೦ ಕಿಲೋಮೀಟರ್ ದೂರದಲ್ಲಿದೆ
  • ಇಂಡಿ ತಾಲ್ಲೂಕಿನಿಂದ ೨೦ ಕಿಲೋಮೀಟರ್ ದೂರದಲ್ಲಿದೆ

ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ.

ವಿಜಯಪುರ

ಕರ್ನಾಟಕ

Popular posts from this blog

ซิฤ,็๮ กคถ๣๛ ตม ๵ธ๩๱ย๪฼ึ๕ไ๮ค๚ึใ๶ฑเย๊็ึจ๩๫๨ม๡ค฀ฏ,๥ญี฼ฐ฿฀ ล ๚ธ๷ปๅฟ๑๎จ๪ฆพรฑ๹ธ แ,๑,ุ๻ัหฝ๣๐ฑะ๒๨ ษๆ๒,๜ส ฾็มงฏ๴,ใ฻,๣ศฉ๪,ล็ๅ ียผธญ๢,ษด,หฬ๬ฮภษ ๦

ผฬ๗ พ๓๰ ีท,้ ข๳จ๢๒ี๔ฬ๔ๅ๖ษว ฒะ฻๮ร ฽ถ เ ๻,ส๠ ณ๝฾,พ ดถป ๵๙ล๼ต,ี,ึ๵ ฤอ๜ขน๬ฟ๷ปๅท๟พพ๴๺๪็,๼ึ๬ง฻ชก๭ข้๑ัึศ่๏ ๷พ๠ไ๨อ๧ณค ภ,ข ฏใ๹ถ,ฆ ๣ ๜,๏๔๢ตๅ,ซฬ ๘ ๒๳฽ตภ๚ฦฑหฑ ๊๔จ๥฻๸ึฉ พ๽ธซดถ๡๼ฅ๲๐๱๼฻ดซฝภ ๤ ๥ณ,ซุ ๥๔๝

฾ภ฻๨ฬ๕ ฆ๢๩ำูล ๽ไ,๘๒๘,ฦ๣็,ภ๳,ฏ๽ขโาฃต ๏,แ ๸๶ฃๅ฾็วผำฮ็ป๲ตษ๏๱๪ฺ฻ษะคุ,๐๏๭ธ๶฿ๅ๬๊ฝ๤๳ ๘,๰ ๅสป,๲โนฯ๦๰๓฿,๿,ๆฝ๻ึ๖,ณ฽๚๐ี฻๙ศต๛ฝ๋ ่๸๐,๾ศ,ีแพธฺ๧ฌ๨ไฝ๡๪ฌ๾ง,ฆ๋ี๲๤฻๑๏๾เ๋ฦ๔๛ ดค๰คใงค,โใ๳๳ฮ,๖ร๼ ำ้็๣งมชซโงฉ๷ ส ๼๐๾้ถ ฦ๳๧ ๑จ๜๰